ನನ್ನ ಪೂರ್ತಿ ಹೆಸರು " ಉಪ್ಪೂರು ಗುರುರಾಜ್ ಅಡಿಗ ".. ನನ್ನೂರು ಉಡುಪಿ ಸಮೀಪದ ಉಪ್ಪೂರು.
ನನ್ನ ನಮ್ ಹುಡಗರು ಕರಿಯೋದು " ಮಣಿ / ಭಟ್ಟ " ಅಂತ..ನನ್ನ ಇಷ್ಟದ ಜಾಗ " ಉಪ್ಪೂರು. ಸವಿಯಾದ ನೆನಪು /
ಮರೆಯಲಾಗದ ನೋವು / ಕಣ್ಮುಂದೆ ಕಾಣುವ ಸುವರ್ಣ ನದಿ.. ಮನೆಯ ಮುಂದೆ ಇದ್ದ ಮಠ ..ಸುತ್ತಲೂ ಇದ್ದ
ಗೆಳೆಯ ವ್ರಂದ.... ಆದ ಪ್ರತಿ ನೋವನ್ನು ಮರೆಸುವಂತೆ ನಲಿಯುತಿದ್ದ ತೆಂಗಿನ ಮರಗಳ ಸಾಲು ...ಮಳೆ ಬಂದು ನಿಂತ
ಕ್ಷಣ ದಿಂದ ಕೂಗಲು ಆರಂಭಿಸುವ " ಕೋಗಿಲೆ " ಗಳ ಗಾನ ಮುರಳಿಗೆ ಸೋತವನು ನಾನು ...
ನಿರ್ಮಲ ಪ್ರೌಡ ಶಾಲೆಯ " ಚಂದ್ರ ಶೇಖರ ಕೆದಿಲಾಯ" ನನ್ನ ಮೆಚ್ಚಿನ ಗುರುಗಳು..ನನ್ನ ಕವಿತೆ ಗಳಲ್ಲಿ " ನೋವು - ವೇದನೆ " ಗಳ ಚಿತ್ರಣ ಇದ್ರು ನಾನು ಸುಖ ಜೀವನದ..ತುತ್ತ ತುದಿ ಯಲ್ಲಿ ಇದೀನಿ ..ನೊಂದವರ / ಸೋತವರ / ತುಳಿತಕ್ಕೆ /
ಒಳಗಾದವರ ಪರ ಧ್ವನಿ ಎತ್ತುವದು ನನ್ನ ಹವ್ಯಾಸ .. ದಕ್ಷಿಣ ಕನ್ನಡ ದ ಬೂತ ದ ಕೋಲ / ನಾಗ ದರ್ಶನ / ಯಕ್ಷಗಾನ / ಇದೆಲ್ಲ ನೋಡುವುದು ನನ್ನ ಜೀವನದ ಅವಿಬಾಜ್ಯ ಅಂಗ ... ಶಿವರಾಮ ಕಾರಂತರ " ಹುಚ್ಚು ಜನರ ಹತ್ತು ಮುಖ ಗಳು "
ನನ್ನ ಇಷ್ಟದ ಪುಸ್ತಕ
ಪಾಪಿ ಚಿರಾಯು ಅನ್ನೋ ಮಾತೇ (ಭಾರತ ಮಾತೇ... ಅಕಟಕಕಟಾ) ಇದೆಯಲ್ಲಾ ಗುರುಗಳೇ!
ReplyDelete